Print this page

ಮಳವಳ್ಳಿ-ಕಾಲೇಜು ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿರುವ ಘಟನೆ

ಮಳವಳ್ಳಿ:  ಕಾಲೇಜು ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿರುವ ಘಟನೆ

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಬಳಿ ನಡೆದಿದೆ ಆತ್ಮಹತ್ಯೆ ಹಿಂದೆ ಹಲವು ಅನುಮಾನದ ಹುತ್ತ ಎಡೆಮಾಡಿಕೊಂಡಿದೆ.
ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಮಾದೇಗೌಡ ಎಂಬುವರ ಪುತ್ರ ವಿದ್ಯಾರ್ಥಿ ಮಹದೇವಸ್ವಾಮಿ (21)ಮೃತಪಟ್ಟ ವಿದ್ಯಾರ್ಥಿ.

ಈತ ಶಾಂತಿ ಕಾಲೇಜಿನಲ್ಲಿ ಬಿಕಾಂ ಪದವಿ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮಹದೇವಸ್ವಾಮಿ ಕಾಲೇಜು ಹಿಂಬಾಗದ ನೀಲಗಿರಿ ತೋಟಸಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಲೇಜಿನ ಹಿಂಭಾಗ ಇಸ್ವೀಟ್ , ಗ್ಯಾಂಬ್ಲಿಂಗ್ ಸಹ ನಡೆಯುತ್ತಿತ್ತು ಎನ್ನಲಾಗಿದೆ.
ಇನ್ನೂ ಈತ ಒಬ್ಬ ಅಸ್ತಮ ರೋಗಿಯಾಗಿದ್ದು ಇಂದು ಬೆಳಿಗ್ಗೆ ತನ್ನ ತಂದೆಯಿಂದ 150 ರೂ ಗಳನ್ನು ತೆಗೆದುಕೊಂಡು ಬಂದಿದ್ದು, ಅವರತಂದೆ ಪೋನ್ ಮಾಡಿದಾಗ ಪೋನ್ ತೆಗೆಯದ ಕಾರಣ ಕಾಲೇಜಿನ ಬಳಿ ಖದ್ದು ಬಂದು ಹಾಜರಾತಿ ನೋಡಿದಾಗ ಶಾಲೆಗೆ ಬಂದಿಲ್ಲ ಎಂಬುದು ಖಾತರಿ ಪಡಿಸಿಕೊಂಡು ಸ್ನೇಹಿತರನ್ನು ವಿಚಾರಿಸಿ ನಂತರ ಕಾಲೇಜಿನ ಹಿಂಬಾಗ ಸತ್ತವಿರುವ ಸುದ್ದಿ ತಿಳಿಯಿತು ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾನೆ. ಮಹದೇವಸ್ವಾಮಿ ಸಾವಿನ ಮುನ್ನ ಮರದ ಮೇಲೆ ನಾನು ಎಂದು ಬರೆದಿದ್ದು ಕಂಡುಬಂದಿದ್ದು, ಈತ ಸಾವಿನ ಹಿಂದೆ ಯಾವ ರಹಸ್ಯವಿದೆ ಎಂಬುದು ಪೊಲೀಸರ ತನಿಖೆಯಿಂದಲೇ ಬಹಿರಂಗವಾಗಬೇಕಾಗಿದೆ.
ಸ್ಥಳಕ್ಕೆ ಈ ಸಂಬಂದ
ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Share this article

About Author

Super User