Print this page

ಕೆ ಆರ್ ಪೇಟೆ ತಾಲೂಕಿನ: ಗೋದಾಮು ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮರಂಭ

ಕೆ ಆರ್ ಪೇಟೆ ತಾಲೂಕಿನ  ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ

ಸಹಕಾರ ಸಂಘ ನಿ. ವತಿಯಿಂದ ನೂತನವಾಗಿ ನಿರ್ಮಿಸಿರುವ  ಗೋದಾಮು ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮರಂಭವು ನಡೆಯಿತು.

ಜಿಲ್ಲಾ ಪಂಚಾಯಿತಿ.ಸದಸ್ಯರಾದ ಬಿ. ಎಲ್ ದೇವರಾಜು ಅವರು ಕಟ್ಟಡ ಉದ್ಘಾಟಸಿ ಮಾತನಾಡಿ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ‌. ಸಹಕಾರ ಸಂಘಗಳು ಅಭಿವೃದ್ಧಿ ರಾಜಕೀಯ ಮುಕ್ತವಾಗಿರಬೇಕು. ಸಹಕಾರ ಸಂಘಗಳು ಮತ್ತು ಹಾಲಿನ ಡೈರಿಗಳು ರೈತರ ಅಭಿವೃದ್ಧಿಗೆ ಎಲ್ಲರೂ ಪ್ರಾಮಾಣಿಕವಾಗಿ ಅರ್ಪಣಾ ಭಾವನೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಬಿ ಎಂ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ ಹರೀಶ್, ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗೇಗೌಡ,ಸಂಘದ ಉಪಾಧ್ಯಕ್ಷೆ ಕೃಷ್ಣಮ್ಮ,ಸಿ ಇ ಒ ಎಸ್ ಕೆ ಸತೀಶ್,ತಾ.ಪಂ.ಮಾಜಿ ಅಧ್ಯಕ್ಷೆ ರೂಪ ಕೃಷ್ಣೇಗೌಡ,ತಾ.ಸಹಕಾರ ಅಭಿವೃದ್ಧಿ ಅಧಿಕಾರಿ ಖಾಲಿದ್ ಅಹ್ಮದ್,ಡಿಸಿಸಿ ಬ್ಯಾಂಕ್ ತಾಲೂಕು ಶಾಖೆಯ ವ್ಯವಸ್ಥಾಪಕ ರಾಜು, ಸಂಘದ ಮೇಲ್ವಿಚಾರಕ ಕೆ ಆರ್ ರಘು,ದೇವಕುಮಾರ್,ಚೆಲುವರಾಜು,ಮಹೇಶ್,ಸಿಇಒ ಸಿದ್ದೇಗೌಡ, ಸಂಘದ ನಿರ್ದೇಶಕರಾದ ರಂಗೇಗೌಡ,ಲಕ್ಕೇಗೌಡ,ನಾಗೇಂದ್ರ, ಕಮಲಮ್ಮ,ಗೋಪಾಲ್, ಅಶ್ವಥ್, ಮಂಜು ನಾಯಕ್, ಮತ್ತಿರರು ಉಪಸ್ಥಿತರಿದ್ದರು.

Last modified on 19/07/2018

Share this article

About Author

Super User