Print this page

ಮಳವಳ್ಳಿ: ಸರ್ಕಾರಿ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿರುವ ಅಧಿಕಾರಗಳ ವಿರುದ್ದ ಹೋರಾಟ

ಮಳವಳ್ಳಿ: ಸರ್ಕಾರಿ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿರುವ ಅಧಿಕಾರಗಳ ವಿರುದ್ದ ಹೋರಾಟ ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಕ್ರಮಕೈಗೊಳ್ಳದೇ ಇರುವುದನ್ನು ಮನನೊಂದು ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಗೆ ಮನವಿ ಸಲ್ಲಿಸಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ಪತ್ರಕರ್ತ ಕೆ.ಎಸ್ ಶಿವಶಂಕರ್ ಎಂಬುವವರೇ ದಯಾಮರಣ ಕೋರಿರುವ ವ್ಯಕ್ತಿ
150 ಕೋಟಿ ಗಿಂತಲೂ ಹೆಚ್ಚು ಸರ್ಕಾರದ ಆಸ್ತಿಗಳು ಅಕ್ರಮಖಾತೆ ಪುರಸಭೆ ಮಾಡಿದೆ. ಉಪವಿಭಾಗಾಧಿಕಾರಿಗಳ ಅನ್ಯಕ್ರಾಂತ ಪ್ರತಿಯನ್ನೇ ತಿದ್ದಿ ಖಾತೆ ಮಾಡಿಸಿರುವ ಆಳತೆಗಿಂತಲೂ ಹೆಚ್ಚು ಮಾರಾಟ ಮಾಡಿರುವ ಬಗ್ಗೆ ದಾಖಲಾತಿ ಸಲ್ಲಿಸಿದ್ದರೂ ಸಹ ಪುರಸಭೆ ಕ್ರಮವಹಿಸದೆ ಕಿರುಕುಳ ನೀಡುತ್ತಿರುವ ಬಗ್ಗೆ ಕ್ರಮ ಕೈಗೊಂಡು 5309/4036 ರ ಅಕ್ರಮ ಖಾತೆಯನ್ನು ರದ್ದು ಮಾಡುವಂತೆ ಕೋರಿದ್ದರೂ ಅಧಿಕಾರಿಗಳು ಪಟ್ಟ ಭದ್ರ ಹಿತಾಸಕ್ತಿಗಳ ಜೊತೆ ಸೇರಿಕೊಂಡು ಕಾನೂನು ಕ್ರಮ ಜರುಗಿಸದೆ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಕೆ.ಎಸ್ ಶಿವಶಂಕರ್, ಈ ಬಗ್ಗೆ ಕ್ರಮ‌ಕೈಗೊಳ್ಳುವಂತೆ ಇಲ್ಲದಿದ್ದರೆ ನನಗೆ ದಯಾಮರಣ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಸುಮಾರು 4 ಪುಟಗಳ ವಿಸ್ಕೃತ ಮಾಹಿತಿ ಹಾಗೂ ಅಕ್ರಮಗಳ ಬಗ್ಗೆ ಸಂಕ್ಷೀಪ್ತವಾಗಿ ದೂರು ಬರೆದು ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ,ತಹಸೀಲ್ದಾರ್ ಗಳಿಗೆ ಹಾಗೂ ಸ್ಥಳೀಯ ಪೊಲೀಸಠಾಣೆಗೂ ದೂರು ನೀಡಿರುವ ಅವರು ಕೂಡಲೇ ಕ್ರಮಕೈಗೊಂಡು ನ್ಯಾಯ ಒದಸುವಂತೆ ಅವರು ಮನವಿಯಲ್ಲಿ ಕೋರಿದ್ದು ಇಲ್ಲವಾದಲ್ಲಿ ನನಗೆ ದಯಾಮರಣ ನೀಡುವಂತೆ ಅವರು ಕೋರಿದ್ದಾರೆ.



Share this article

About Author

Super User