Print this page

ಜೆ.ಸಿ.ಬಿ ಯಂತ್ರದ ಮೇಲೆ ಬಂಡೆ ಕುಸಿದು ವ್ಯಕ್ತಿ ಸಾವು

ದೇವರಹಿಪ್ಪರಗಿ ಬಳಿ ಜೆ.ಸಿ.ಬಿ ಯಂತ್ರದ ಮೇಲೆ ಬಂಡೆ ಕುಸಿದು ವ್ಯಕ್ತಿ ಸಾವು

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಬಳಿ ಇರುವ ಪಡಗಾನೂರ ಗ್ರಾಮದ ವ್ಯಾಪ್ತಿಯ ಬಳಿ ಗಣಿಯಲ್ಲಿ ಕಲ್ಲು ತೆಗೆಯುವ ಸಂದರ್ಭದಲ್ಲಿ ಬಂಡೆಯೊಂದು ಉರುಳಿ ಜೆ ಸಿ ಬಿ ಯಂತ್ರದ ಮೇಲೆ ಬಿದ್ದು ಕಾರ್ಮಿಕ ಸ್ಥಳದಲ್ಲಿಯೇ ಸಾವು.ಕಲ್ಲು ತೆಗೆಯುವ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ದೊಡ್ಡ ಬಂಡೆಯೊಂದು ಕುಸಿದ ಪರಿಣಾಮವಾಗಿ ಯಂತ್ರ ಸಂಪೂರ್ಣ ನುಜ್ಜುಗುಜ್ಜಾಗಿದೆ .ಚಾಲಕ ಯಂತ್ರ ದಲ್ಲೇ ಸಿಕ್ಕಿ ಜಾರ್ಖಂಡ್ ರಾಜ್ಯದ ಹಜಾರಿಭಾಗ ಜಿಲ್ಲೆಯ ಕೆಂದವಾಡಿ ಗ್ರಾಮದ ಚೇತಲಾಲ ಶನಿಛರ ಮಾತೋ (24) ಎಂಬ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ದೇವರಹಿಪ್ಪರಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share this article

About Author

Madhu