ರಾತ್ರೊ ರಾತ್ರಿ ಲಾಯರ್ ಕೂಲೆ .! ಮಾಡಿದ್ದು ಯಾರು.??? ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಶಂಕೆ...
ಕೆ.ಆರ್.ಪೇಟೆ :ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ಸತೀಶ್ (೩೮) ಕೊಲೆಯಾಗಿರೊ ವಕೀಲ.ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ವಕೀಲ ಸತೀಶ್ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕಾಗಿ ಬಂದಿದ್ದಾಗ ನಡೆದಿರುವಂಥ ಘಟನೆ.
ಘಟನೆ ವಿವರಣೆ: ನಾಗರಘಟ್ಟ ಗ್ರಾಮದ ಲೇ ರಾಜೇಗೌಡ್ ರ ಮಕ್ಕಳಾದ ಸತೀಶ್ ಮತ್ತು ಉಮೇಶ್ ಎಂಬ ಇಬ್ಬರೂ ಮಕ್ಕಳು ಮೂಲತಹ ಸತೀಶ್ ವಕೀಲ ಕೆಲಸಮಾಡತ್ತಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವಾಸವಾಗಿದ್ದು. ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು.ಗ್ರಾಮದಲ್ಲಿ ಹಬ್ಬವಿರುವ ಕಾರಣ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕೆ ಬಂದಿದ್ದಾಗ ನಡೆದಿರುವಂಥ ಘಟನೆ .
ತಮ್ಮ ನ ಹೇಳಿಕೆ : ಮನೆಯಲ್ಲಿ ಅಣ್ಣ ಮತ್ತು ತಮ್ಮ ಇಬ್ಬರೆ ಇದ್ದು ನಾನು ಮೇಲಿನ ರೂಮಿನಲ್ಲಿ ಇದ್ದೆ. ಸುಮಾರು ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಯಾರೊ ನಾಲ್ಕು ಜನ ನಮ್ಮ ಅಣ್ಣ ಬಳಿ ಬಂದು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು ನಾನು ನಮ್ಮ ಅಣ್ಣ ಮಾತನಾಡತ್ತಿರಲ್ಲಿಲಾ ಅದ್ದರಿಂದ ನಾನು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ನಾನು ಹೊಗಲಿಲ್ಲಾ ಬೆಳ್ಳಗೆ ನೊಡಿದ್ದಾಗ ನನ್ನ ಅಣ್ಣ ರಕ್ತ ದ ಮಡುವಿನಲ್ಲಿ ಬಿದ್ದಿದ್ದರು ನಂತರ ಗ್ರಾಮಸ್ಥರಿಗೆ ತಿಳಿಸಿದೆ ಎಂದು ಹೇಳಿಕೆ ನೀಡಿದ್ದು.
ಸಹೋದರನ ಹೇಳಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಮೃತ ವಕೀಲನ ಸಹೋದರನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.ಹತ್ಯೆಸ್ಥಳಕ್ಕೆ ಹಾಸನ ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ ಕೊಲೆ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡು .ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದೆ. ಪೋಲಿಸ್ ರ ತನಿಖೆ ಯಿಂದ ಅಪರಾಧಿಯಾರು ಎಂದು ತಿಳಿಯಬೇಕಿದೆ.ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.