Print this page

ಸುಮಲತಾ ಅಂಬರೀಶ್ ಗೆ ಸೋಲು: ಭವಿಷ್ಯನುಡಿದ ರಾಜಗುರು ದ್ವಾರಕಾನಾಥ್

ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣದಲ್ಲಿರುವ ಸುಮಲತಾ ಅಂಬರೀಶ್‌ ಅವರು ಸೋಲುತ್ತಾರೆ? ಹೌದು, ಇದೇ ತರನದ ಭವಿಷ್ಯವನ್ನು ರಾಜ ಗುರು ದ್ವಾರಕಾನಾಥ್ ಅವರು ಭವಿಷ್ಯ ನುಡಿಸಿದ್ದಾರೆ.

ಮಂಡ್ಯ : ಅವರು ಇಂದು ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಹಾಸನ, ತುಮಕೂರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಕಾಣುತ್ತಾರೆ ಅಂತ ರಾಜ ಗುರು ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

ಇನ್ನು ಇದೇ ವೇಳೆ ಅವರು ನನ್ನ ಸಿಎಂ ಭೇಟಿಯಾದ ವೇಳೆಯಲ್ಲಿ ಅವರೇನು ಕೇಳಲಿಲ್ಲ ನಾನೇ ನೀವು ಧೈರ್ಯ ಕೆಡಬೇಡಿ ಎಂದಿದ್ದೇನೆ ಅಂತ ಮಾತ್ರ ಹೇಳಿದ್ದೇನೆ ಅಂತ ಹೇಳಿದ ಅವರು ಮಾಧ್ಯಮ ಗಳ ಜತೆ ಯಾವತ್ತು ವಿಭಿನ್ನವಾಗಿ ಮಾತಾನಾಡಬೇಡಿ ಅಂತ ವಾಗ್ದಾನ ಮಾಡಿಕೊಂಡಿದ್ದೇನೆ ಧರ್ಮದ ಹೆಸರಿನಲ್ಲಿ ಯಾರು ಸಿಎಂ ಆಗಿದ್ದರೋ ಅವರನ್ನು ಕೆಳೆಗಡೆ ಇಳಿಸೋದು ಅಷ್ಟು ಸುಲಭ ಅಲ್ಲದೇವರನ್ನು ಪೂಜೆ ಮಾಡುವವರನ್ನು ದೇವರನ್ನು ಕಾಪಾಡುತ್ತಾರೆ. ಈಗಿನ ಸರ್ಕಾರ ಬಿದ್ದರೆ ನಂಗೆ ನೋವಾಗುತ್ತದೆ ಪದೇ ಪದೇ ಚುನಾವಣೆ ಎದುರಿಸೋಕೆ ಆಗಲ್ಲ ಅಂತ ಹೇಳಿದರು.

ಇದೇ ವೇಳೆ ಅವರು ಮಾತನಾಡುತ್ತ ಕೇಂದ್ರದಲ್ಲಿ ಮೋದಿ ಸರಕಾರ ಬರುವುದನ್ನು ಯಾರು ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ, ಆದರೆ ಬಹುಮತ ಮಾತ್ರ ಬಿಜೆಪಿಗೆ ಬರಲ್ಲ ಅಂತ ಅವರು ಹೇಳಿದರು.

Share this article

About Author

Madhu