Print this page

ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತ ಆತ್ಮಹತ್ಯೆ.

ಮಳವಳ್ಳಿ ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ.

ಮಳವಳ್ಳಿ: ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ. ಮುತ್ತುರಾಜು 35 ವರ್ಷ ಮೃತಪಟ್ಟ ದುರ್ದೈವಿ. ಈತ ಸುಮಾರು ನಾಲ್ಕು ಎಕರೆ ಜಮೀನನ್ನು ಹೊಂದಿದ್ದರು. ವ್ಯವಸಾಯ ಮಾಡುವ ಸಲುವಾಗಿ ಭತ್ತ,ಬಾಳೆ, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಬ್ಯಾಂಕಿನಿಂದ ಮೂರು ಲಕ್ಷ ಸಾಲ ಮಾಡಿ ಬೇಸಾಯ ಮಾಡಿದ್ದರು, ತಾನು ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲವಾದ್ದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಸಹ ಪಾವತಿಸಲಾಗುತ್ತಿಲ್ಲ, ಎ ಮನನೊಂದು ತಮ್ಮ ಜಮೀನಿನ ಬಳಿ ನೇಣು ಬಿಗಿದು ಸಾವನ್ನಪ್ಪಿದ್ದಾನೆ.ಮೃತರಿಗೆ ತಾಯಿ, ಪತ್ನಿ ಪುಟ್ಟಲಕ್ಷ್ಮಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಬಿ.ಎಸ್. ಶಿವರುದ್ರ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.

Share this article

About Author

Madhu