Print this page

ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋ ಫೇಸ್ ಬುಕ್ ನಲ್ಲಿ ಶೇರ್.ಕಾನೂನಿನ ಕ್ರಮಕ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಮುಸ್ಲಿಂ ಯುವಕ.  ಕಾನೂನಿನ ಕ್ರಮಕ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಕೃಷ್ಣರಾಜಪೇಟೆ : ಪಟ್ಟಣದ ಗುಜರಿ ವ್ಯಾಪಾರಿ ಆದ ಶಫಿ ಎಂಬ ಮುಸ್ಲಿಂ ಯುವಕ ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡುವ ಮೂಲಕ ಪಟ್ಟಣದ ಅಶಾಂತಿ ನಿರ್ಮಾಣ ಮಾಡಿದ್ದಾನೆ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಲಾಯಿತು .ಇದೇ ಸಮಯದಲ್ಲಿ ಮಾತನಾಡಿದ ಡಾಕ್ಟರ್ ಕೃಷ್ಣಮೂರ್ತಿ ಭಾರತ ಪಾಕಿಸ್ತಾನ ನಡುವೆ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ನಮ್ಮ ಭಾರತ ದೇಶದಲ್ಲಿ ಇದ್ದು ಈ ಶಫಿ ಎಂಬ ಹುಡುಗ ನೀಚ ಕೆಲಸ ಮಾಡಿದ್ದಾನೆ. ಪಾಕಿಸ್ತಾನದ ಧ್ವಜಕ್ಕೆ ಮುತ್ತನ್ನು ಕೊಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದಾನೆ. ಇಂತಹ ವ್ಯಕ್ತಿಗಳನ್ನು ನಮ್ಮ ದೇಶದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು ಇಂತಹ ವ್ಯಕ್ತಿಯ ಮೇಲೆ ಕಾನೂನಿನ ಕ್ರಮ ಕೈಗೊಂಡಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಜಯ ಕರ್ನಾಟಕ ಅಧ್ಯಕ್ಷ ರಾದ ಕುಮಾರ್ ಅವರು ಕುಡಿಯಲು ನೀರು ತಿನ್ನಲು ಅನ್ನ ಬದುಕಲು ಭಾರತ ದೇಶ ಬೇಕು . ಇಂತಹ ವ್ಯಕ್ತಿಗಳನ್ನು ಭಾರತ ದೇಶದಿಂದ ಗಡಿಪಾರು ಮಾಡಬೇಕು ಎಂದು ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ .ಎಂದು ಆಕ್ರೋಶ ವ್ಯಕ್ತಪಡಿಸಿದರು .10ನಿಮಿಷಗಳ ಕಾಲ ಠಾಣೆಯ ಮುಂದೆ ಕುಳಿತು ಪಾಕಿಸ್ತಾನ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಆಟೋ ಚಾಲಕರ ಅಧ್ಯಕ್ಷರಾದ ವಾಸು , ಅವರು ಜಯ ಕರ್ನಾಟಕ ಅಧ್ಯಕ್ಷರಾದ ಕುಮಾರ್ ,ಡಾಕ್ಟರ್ ಕೃಷ್ಣಮೂರ್ತಿ , ಇನ್ನು ನೂರಾರು ಪ್ರತಿಭಟನಾಕಾರರು ಹಾಜರಿದ್ದರು ..

Share this article

About Author

Madhu