ಮಳವಳ್ಳಿ ಪಟ್ಟಣದಲ್ಲಿ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು ಹಾಗೂ ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರಿಗೆ ಭಾವ ಪೂರ್ವ ಶ್ರದ್ಧಾಂಜಲಿ ಸಭೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ನಂತರ ಒಂದು ನಿಮಿಷ ಮೌನ ಅಚರಿಸಲಾಯಿತು. ನಂತರ ಬಿಜೆಪಿ ಮುಖಂಡ ಆಶೋಕ ಕ್ಯಾತನಹಳ್ಳಿ ಮಾತನಾಡಿ , ಅಟಲ್ ಬಿಹಾರ್ ವಾಜಪೇಯಿಯವರು ಅಜಾತಶತ್ರುವಾಗಿ ಹೆಸರುವಾಸಿಯಾಗಿದ್ದು, ದೇಶದಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ, ವಾಜಪೇಯಿ ರವರು ಬಿಜೆಪಿ ಪಕ್ಷ ದಲ್ಲಿ ನಾಯಕರಾಗಿ ಹಲವು ಬಾರಿ ಕೇಂದ್ರ ಸಚಿವರಾಗಿ .ನಂತರ ಪ್ರಧಾನಮಂತ್ರಿ ಯಾಗಿ ದೇಶದ ಅಭಿವೃದ್ಧಿಗೆ ಸಾಕಷ್ಟು ಹೆಸರು ಮಾಡಿದರು ಇದಲ್ಲದೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಪ್ರಮುಖ ಕಾರಣರಾಗಿದ್ದರು ಎಂದರು.
ಸಭೆಯಲ್ಲಿ ಸಾಲುಮರನಾಗರಾಜು, ಕಸ್ತೂರಿಸಿರಿಗನ್ನಡ ವೇದಿಕೆ ಅಧ್ಯಕ್ಷೆ ನಾಗರತ್ನಮ್ಮ , ಸಂದೇಶ್, ನಾಗೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು.