Print this page

ತಾನು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡಗು ನಿರಾಶ್ರಿತರಿಗೆ ಕೊಡುಗೆ ನೀಡಿ ಮಾನವೀಯತೆ ಮೇರೆದ ಮಂಡ್ಯದ ರೈತ.

ರೈತ ತಾನು ಕಷ್ಟ ಪಟ್ಟು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೇರೆದ ಮಂಡ್ಯದ ರೈತ.

ಮಳವಳ್ಳಿ  :ರಾಜ್ಯದಲ್ಲಿ  ಕಳೆದ. 4 ವರ್ಷದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿ  ಜೀವನ ನಡೆಸಲು ಸಂಕಷ್ಟದಲ್ಲಿದ್ದರೂ ಇಲ್ಲೊಬ್ಬ ರೈತ ತಾನು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಪೇಟೆ ನಿವಾಸಿ ಹೆಚ್. ಬಸವರಾಜು  ಎಂಬುವವರೆ  ಮಾನವೀಯತೆ ಮೆರೆದ ವ್ಯಕ್ತಿ, ಯಾಗಿದ್ದು,  ಆರು ತಿಂಗಳಿನಿಂದ  ಕಷ್ಟಪಟ್ಟು ಬೆಳೆದ  ಸುಮಾರು 130 ಕೆ.ಜಿ ಯಷ್ಟು ರೇಷ್ಮೆ ಬೆಳೆಯನ್ನು ಬಸವರಾಜು ರವರ ತೋಟದ ಮನೆಯಲ್ಲಿ  ಹರಾಜು ಮಾಡಲಾಗಿ ಕೆ.ಜಿ ಗೆ 302 ರೂ ರಂತೆ ಕೂಗಿದರು ಅದರಂತೆ  ಸುಮಾರು 30 ಸಾವಿರ ರೂ ರಷ್ಟು ಅಂದಾಜು ಮಾಡಲಾಗಿದೆ.

  ಇದೇ ಸಂದರ್ಭದಲ್ಲಿ  ರೈತ ಹೆಚ್. ಬಸವರಾಜು  ಮಾತನಾಡಿ,  ಮಂಡ್ಯ ಜಿಲ್ಲೆಯ ರೈತರಿಗೆ  ನೀರು ಪೂರೈಸುವ ಜಿಲ್ಲೆ ಕೊಡುಗು ಈಗ ಕೊಡಗಿನಲ್ಲಿ  ಮಳೆರಾಯನ ಅಟ್ಟಹಾಸಕ್ಕೆ ಅಲ್ಲಿನ ಜನ ಜೀವನ ಅಸ್ತವ್ಯಸ್ತ ವಾಗಿದ್ದು , ಅವರು ನಮ್ಮಂತೆಯೇ ಎಂದು ತಿಳಿದು ನಾನು ಅವರಿಗೆ ನನ್ನ ಕೈಯಲ್ಲಿ ಸಣ್ಣ ಕಿರುಸಹಾಯ ಮಾಡುತ್ತಿದ್ದೇನೆ. ಪ್ರತಿಯೊಬ್ವರು ಸಹ ಅಲ್ಲಿನ ಜನರು ನಮ್ಮವರು ಎಂದು ತಿಳಿದು ಸಹಾಯ ಮಾಡಿ  . ನಾಳೆ ಬೆಳಿಗ್ಗೆ  ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ  ಪರಿಹಾರ ನಿಧಿ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ  ರೈತನ ಪತ್ನಿ  ಸುನೀತಾ ರವರು ಸಹ  ನನ್ನ ಗಂಡ ಇಂತಹ ಒಳ್ಳೆಯ ಕೆಲಸ ಮಾಡಿರುವುದಕ್ಕೆ ನನಗೂ ಸಂತೋಷವಾಗಿದೆ. ಎನ್ನುವ ಮೂಲಕ. ರೈತನಿಗೂ ಸಾಥ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ  ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ  ಪುಟ್ಟುಮಾದು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ರವರು ರೈತ ಕುಟುಂಬಕ್ಕೆ  ಅಭಿನಂದನೆ ಸಲ್ಲಿಸಿದರು.

 

Share this article

About Author

Madhu