Print this page

ಕಾಡಾನೆಗಳ ದಾಳಿಯಿಂದ ಭತ್ತದ ಗದ್ದೆ ನಾಶ.

ಮೂರು ಕಾಡಾನೆಗಳ ಹಿಂಡು ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ಮುನಿವೆಂಕಟಯ್ಯ ಎಂಬ ಬಡ ರೈತರ ಜಮೀನಿಗೆ  ಮೂರು ಕಾಡಾನೆಗಳ ಹಿಂಡುಗಳ ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ಸೋಲಬ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮುನಿವೆಂಕಟಯ್ಯ ಎಂಬುವರಿಗೆ ಸೇರಿದ 7 ಗುಂಟೆ ಹಾಕಿದ ಭತ್ತದ ಗದ್ದೆ ನಾಶವಾಗಿದ್ದು , ಸುಮಾರು 30 ಸಾವಿರ ರೂ ನಷ್ಟವಾಗಿದ್ದು, ಮುನಿವೆಂಕಟಯ್ಯ ದೂರಿನ ಮೇರೆಗೆ  ಸ್ಥಳಕ್ಕೆ ಅರಣ್ಯಾಧಿಕಾರಿ ಪ್ರವೀಣ್ ಬೇಟಿ ಪರಿಶೀಲನೆ ನಡೆಸಿದ್ದರು.  ಈ ಕಾಡಾನೆಗಳು ಬಸವನಬೆಟ್ಟದ ಕಡೆಯಿಂದ ಬಂದಿದ್ದು  ಮೂರು ಕಾಡಾನೆಗಳಿದ್ದು ,   ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗೆ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ. ಇದಲ್ಲದೆ ಹಾನಿಗೊಳಗಾದ ರೈತ ಮುನಿವೆಂಕಟಯ್ಯ  ಕೂಡಲೇ ಬೆಳೆಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೆ ಈ ಭಾಗದಲ್ಲಿ ಆಗಾಗ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

 

Share this article

About Author

Madhu