Print this page

ವಿಶ್ವಕಪ್​ನಿಂದ ಪಾಕ್​ ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಭಾರತ ಟೂರ್ನಿಯಿಂದ ಔಟ್​ ! ಕುತೂಹಲ ಘಟ್ಟದಲ್ಲಿ ಬಿಸಿಸಿಐ ನಡೆ.

ವಿಶ್ವಕಪ್​ನಿಂದ ಪಾಕಿಸ್ತಾನವನ್ನು ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಭಾರತ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿಕೆ
 
ಸುಪ್ರೀಂಕೋರ್ಟ್​ ನೇಮಕ ಮಾಡಿರುವ ನಿರ್ವಾಹಕ ಸಮಿತಿ (ಸಿಎಒ)  ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್​​ಗೆ ಹೆಸರಿಗೆ ಪತ್ರದ ಕರಡು ಪ್ರತಿ ತಯಾರಿಸಿದ್ದು, ವಿಶ್ವಕಪ್​ನಿಂದ ಪಾಕಿಸ್ತಾನವನ್ನು ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಭಾರತ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡಿದೆ ಎಂಬ ಅಂಶವನ್ನ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಈ ಪತ್ರ ತಯಾರಿಸಿದ್ದು,  ಇದನ್ನು ನಿರ್ವಾಹಕ ಸಮಿತಿ ಚೇರ್ಮನ್ ವಿನೋದ್ ರೈ ಅಂಗೀಕರಿಸಿದ್ದಾರೆ. ಬಿಸಿಸಿಐ ಈ ಸಂಬಂಧ ತನ್ನ ಅಂತಿಮ ನಿರ್ಧಾರ ಇಂದು ಕೈಗೊಳ್ಳಲಿದೆ.ಇದರ ಜೊತೆಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್​ ಭಾರತ ವಿಶ್ವಕಪ್​ನಲ್ಲಿ ಪಾಕ್ ಜೊತೆಗೆ ಆಡಬಾರದು ಎಂದು ಖಡಕ್ಕಾಗೇ ಹೇಳಿದ್ದಾರೆ. 

Share this article

About Author

Madhu